ಮದ್ದೂರು

ಮದ್ದೂರು ಮಂಡ್ಯ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ವಡೆಗೆ ಪ್ರಸಿದ್ಧಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಇಲ್ಲಿಗೆ ಕೂಗಳತೆ ದೂರದಲ್ಲಿರುವ ಸೋಮನಹಳ್ಳಿಯವರು. ಮದ್ದೂರಿನ ಹತ್ತಿರದಲ್ಲಿರುವ ಶಿವಪುರದಲ್ಲಿ ೧೯೩೮ರಲ್ಲಿ ಧ್ವಜ ಸತ್ಯಾಗ್ರಹ ನಡೆಯಿತು ಮತ್ತು ಮ್ಯೆಸೂರು ಕಾಂಗ್ರೆಸ್ಸಿನ ಪ್ರಥಮ ಅಧಿವೇಶನ ನಡೆಯಿತು.ಮದ್ದೂರು ಎರಡೂ ಕಡೆ ಕ.ರಾ.ರ.ಸಾ.ನಿ ಬಸ್ ನಿಲ್ದಾಣ ಹೊಂದಿದೆ. ಮದ್ದೂರು ಬೆಂಗಳೂರು ಮತ್ತು ಮೈಸೂರು ಮಧ್ಯದಲ್ಲಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ೨೭೫ ಹಾದು ಹೋಗುತ್ತದೆ. ಹಾಗಾಗಿ ಹೋಟೆಲ್‌ಗಳು ಹೆಚ್ಚಾಗಿವೆ. ಅಡಿ ಗಾಸ್,ತಿಮ್ಮ ದಾಸ್,ಮದ್ದೂರು ಕೆಫೆ ಹಾಗೂ ಏಟುಬಿ ಹೋಟೆಲ್‌ಗಳು ಪ್ರಸಿದ್ಧಿ ಪಡೆದಿವೆ. ಮದ್ದೂರಿನಿಂದ ನೇರವಾಗಿ ಕುಣಿಗಲ್, ತುಮಕೂರು, ಮಳವಳ್ಳಿ, ಕೊಳ್ಳೇಗಾಲ,ಚಾಮರಾಜನಗರ ಹಾಗೂ ಬೆಂಗಳೂರು ಮೈಸೂರು ಕಡೆಗೆ ಹೋಗಬಹುದು. ಮದ್ದೂರಿನಲ್ಲಿ ರೈಲು ನಿಲ್ದಾಣ ಕೂಡ ಇದೆ. ಮದ್ದೂರಿನಲ್ಲಿ ಮದ್ದೂರಮ್ಮ ದೇವಸ್ಥಾನ, ಉಗ್ರ ನರಸಿಂಹ ದೇವಸ್ಥಾನ ಹಾಗೂ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಗಳು ಪ್ರಸಿದ್ಧಿ ಹೊಂದಿವೆ. ಮದ್ದೂರಿನಲ್ಲಿ ಎರಡು ಕೈಗಾರಿಕಾ ಪ್ರದೇಶಗಳಿವೆ. ಒಂದು ಸೋಮನ ಹಳ್ಳಿ ಕೈಗಾರಿಕಾ ಪ್ರದೇಶ-ಇದು ಮದ್ದೂರು ತಾಲ್ಲೂಕು ಮತ್ತು ಮಂಡ್ಯ ಜಿಲ್ಲೆಯ ಅತಿದೊಡ್ಡ ಕೈಗಾರಿಕಾ ಪ್ರದೇಶ. ಇಲ್ಲಿ ಗ್ರಾನೈಟ್ ಗಳು, ಗಾರ್ಮೆಂಟ್ಸ್ ಗಳು,ಬ್ಯಾಟರಿ ಶೆಲ್ ಗಳು,ಹಾಗೂ ರಾಸಾಯನಿಕ ಗೊಬ್ಬರವನ್ನು ಅತಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಎರಡನೆಯದು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶ- ಇಲ್ಲಿ ಗಾರ್ಮೆಂಟ್ಸ್ ಗಳು ಅತಿ ಹೆಚ್ಚಾಗಿವೆ, ಮಂಡ್ಯ ಜಿಲ್ಲೆಯ ಹಾಲಿನ ಉತ್ಪಾದನಾ ಕೇಂದ್ರವು ಇಲ್ಲೇ ಇದೆ. ಪಕ್ಕದಲ್ಲಿ ಏಟುಬಿ ರೆಸ್ಟೋರೆಂಟ್ ಕೂಡ ಇದೆ. ಮದ್ದೂರಿನ ಶಿವಪುರದಲ್ಲಿ ಹಿಂದಿನ ಕಾಲದ ಸತ್ಯ ಗ್ರಹ ಸೌಧವಿದೆ.ಇಲ್ಲಿ ಪುರಸಭೆ,ಆರಕ್ಷಕ ಠಾಣೆ, ಅಗ್ನಿ ಶಾಮಕ ಠಾಣೆ, ಮಿನಿ ವಿಧಾನ ಸೌಧ,ತಾಲ್ಲೂಕು ನ್ಯಾಯಾಲಯ,ಅಂಚೆ ಕಛೇರಿ,ದೂರವಾಣಿ ವಿನಿಮಯ ಕೇಂದ್ರ,ಸಂಚಾರಿ ಪೋಲಿಸ್ ಠಾಣೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ.

ಭೌಗೋಳಿಕ

ಮದ್ದೂರು 12°35′03″N 77°02′42″E / 12.584169°N 77.0449°E ಯಲ್ಲಿ ಕಾಣಸಿಗುತ್ತದೆ. ಸಮುದ್ರ ಮಟ್ಟದಿಂದ ೨೧೭೫ ಅಡಿ ಎತ್ತರದಲ್ಲಿದೆ.

ಸಾಮಾಜಿಕ

೨೦೦೧ ರ ಜನಗಣತಿಯ ಪ್ರಕಾರ ಮದ್ದೂರಿನಲ್ಲಿ ಸುಮಾರು ೩೦,೦೦೦ ಜನಸಂಖ್ಯೆಯಿದೆ, ಇವರಲ್ಲಿ ಶೇ ೫೧ ರಷ್ಟು ಪುರುಷರು ‍‍ಮತ್ತು ೪೯ ಅಷ್ಟು ಮಹಿಳೆಯರು ಇದ್ದಾರೆ. ಒಕ್ಕಲಿಗ ಜನಾಂಗದ ಪ್ರಾಬಲ್ಯವಿರುವ ಇಲ್ಲಿ ಇತರ ಜನಾಂಗದವರೂ ಸಹ ಸಾಮರಸ್ಯದ ಬಾಳು ನಡೆಸುತ್ತಿದ್ದಾರೆ. ೨೦೧೧ರ ಜನಗಣತಿಯ ಪ್ರಕಾರ ೧ ಲಕ್ಷಕ್ಕು ಹೆಚ್ಚು ಜನರಿದ್ದಾರೆ. ಇಲ್ಲಿ ಗೌಡ (ಒಕ್ಕಲಿಗ) ಜನಾಂಗದವರು ಹೆಚ್ಚಾಗಿದ್ದಾರೆ.

ವಿಶೇಷ ತಿನಿಸುಗಳು

ಮದ್ದೂರು ವಡೆ ಇಲ್ಲಿಯ ಬಹಳ ಜನಪ್ರಿಯ ತಿನಿಸು. ಇದರ ರುಚಿ ಸವಿದವರು ಜೀವಮಾನದಲ್ಲೆಂದು ಮರೆಯಲು ಸಾದ್ಯವೇ ಇಲ್ಲ.. ಈ ವಡೆಯು ಮದ್ದೂರಲ್ಲಿ ಮಾತ್ರವಲ್ಲದೆ ಇಡ್ಡಿ ಕರ್ನಾಟಕದಲ್ಲೆ ಪ್ರಸಿದ್ಧಿ ಪಡೆದಿದೆ.ರೈಲು ನಿಲ್ದಾಣಗಳಲ್ಲಿ ಮದ್ದೂರು ವಡೆ ಬಹಳ ಪ್ರಸಿದ್ಧಿ ಹೊಂದಿದೆ. ಬೆಂಗಳೂರು- ಮೈಸೂರು ರೈಲು ನಿಲ್ದಾಣಗಳಲ್ಲಿ ಅತಿ ಹೆಚ್ಚು ಬೇಡಿಕೆ ಇದೆ.ಮದ್ದೂರಿನಲ್ಲಿ ದಕ್ಷಿಣ ಭಾರತ ಶೈಲಿಯ ತಿನಿಸುಗಳು ದೊರೆಯುತ್ತವೆ.

ಪ್ರೇಕ್ಷಣಿಯ ಸ್ಥಳಗಳು

|| ಎಸ್ ಐ ಹಾಗಲಹಳ್ಳಿ|| ಇದು ಒಂದು ಮದ್ದೂರು ತಾಲ್ಲೂಕಿನ ಪುಟ್ಟ ಗ್ರಾಮ. ಸುಮಾರು ಮದ್ದೂರಿನಿ೦ದ ೧೫ ಕೀ. ಮೀಟರ್ ಅಂತರವಿದ್ದು.. ಹಾಗೂ ಕೆ ಎಮ್ ದೊಡ್ಡಿಯಿಂದ ಸುಮಾರು ೯ ಕೀ. ಮೀಟರ್ ಅಂತರವಿದೆ. ಈ ಗ್ರಾಮದ ಬಳ್ಳಿ ಶಿಂಷಾ ನದಿ ಹರಿಯುವುದರಿ೦ದ ಆ ಗ್ರಾಮಕ್ಕೆ ದೂರದ ಪಟ್ಟಣಗಳಿಂದ ವಲಸೆ ಬ೦ದು ಮೀನುಗಾರಿಕೆ ಮತ್ತು ವಿಶ್ರಾಂತಿ ಪಡೆದುಕೊಳ್ಳುತ್ತರೆ.. ಮತ್ತು ಆ ಗ್ರಾಮದ ಬಳ್ಳಿಯೇ ಶಿಂಷಾ ನದಿಗೆ ಅಡ್ಡಲಾಗಿ ದೊಡ್ಡ ಅಣೆಕಟ್ಟೆಯನ್ನು ಮಾರ್ಪಡಾಗಿ ಇರುವುದರಿ೦ದ ಆ ಸ್ಥಳದಲ್ಲಿ ಚಿತ್ರಿಕರಣವು ಕೂಡ ಮಾಡುತ್ತಾರೆ. ಆ ಅಣೆಕಟ್ಟೆಯನ್ನು ಎಚ್. ಡಿ ದೇವೆಗೌಡರು ಪ್ರಧಾನಮಂತ್ರಿಯಾಗಿದ್ದಾಗ ಈ ಅಣೇಕಟ್ಟನ್ನು ಕಟ್ಟಿಸಿಕೊಟ್ಟರು. ||ವೈದ್ಯನಾಥಪುರ||- ವೈದ್ಯನಾಥೇಶ್ವರ ದೇವಸ್ಥಾನ ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲೊಂದು. ಈ ದೇವಾಲಯ ಕರ್ನಾಟಕದಲ್ಲಿ ಬಹಳ ಪ್ರಸಿದ್ಧಿ.ಇದು ಗೋವಿನ ಹಾಡು ಕವಿಯ ತವರೂರು ಎಂದು ಕರೆಯುತ್ತಾರೆ.ಈ ದೇವಾಲಯವು ತನ್ನದೆ ಆದ ಇತಿಹಾಸ ಹೊಂದಿದೆ.ಇಲ್ಲಿ ಸಿಗುವ ಉತ್ತದ ಮಣ್ಣಿಂದ ಎಲ್ಲಾ ರೋಗಗಳು ಗುಣಮುಖವಾಗುತ್ತವೆ.ಇಲ್ಲಿ ದೇವಸ್ಥಾನದ ಸೀಡಿಗಳು ಹಾಗೂ ಡಿವಿಡಿಗಳು ದೊರೆಯುತ್ತವೆ. ||ನೀಲಕಂಠನ ಹಳ್ಳಿ||- ಇದು ಮದ್ದೂರಿನಿಂದ ಏಳು(೭)ಕಿಲೋಮೀಟರ್ ದೂರವಿದೆ. ಇದು ಕಸಬಾ ಹೋಬಳಿ, ಆಲೂರು ಅಂಚೆಗೆ ಒಳಪಡುತ್ತದೆ. ಪಿನ್ ಕೋಡ್ ಸಂಖ್ಯೆ-೫೭೧೪೩೩(571433). ಸಮುದ್ರ ಮಂಥನ ನಡೆಸಿ ಬಂದ ಮೇಲೆ ಇಲ್ಲಿ ಶಿವನ ಕಂಠ ನೀಲಿಯಾಗಿದ್ದರಿಂದ ಈ ಊರಿಗೆ ನೀಲಕಂಠನ ಹಳ್ಳಿ ಎಂಬ ಹೆಸರು ಬಂದಿದೆ. ಇಲ್ಲಿ ತುಂಬ ದೇವಾಲಯಗಳಿವೆ -ಬಸವೇಶ್ವರ,ವೀರಭದ್ರೇಶ್ವರ, ಮಾಯಮ್ಮ,ಕ್ಯಾತಮ್ಮ ಹಾಗೂ ರಾಕಸಮ್ಮ ದೇವಸ್ಥಾನ.ಈ ಊರಿನಲ್ಲಿ ಶಿಂಷಾ ನದಿಗೆ ಅಡ್ಡಲಾಗಿ ಒಂದು ಅಣೆಕಟ್ಟು ಕಟ್ಟಲಾಗಿದೆ ಇಲ್ಲಿಂದ ನೀರನ್ನು ಕೆ.ಹೊನ್ನಲಗೆರೆಯ ಕೆರೆಗೆ ಹರಿಸಲಾಗುತ್ತದೆ (ಬಾಣೋಜಿ ಪಂಥ್ ಏತನೀರಾವರಿ ಯೋಜನೆ ಮೂಲಕ).ಇಲ್ಲಿ ಭತ್ತ, ರಾಗಿ,ಕಬ್ಬು ಹೆಚ್ಚಾಗಿ ಬೆಳೆಯುತ್ತಾರೆ. ಪಕ್ಕದಲ್ಲಿ ಬೊಮ್ಮಲಿಂಗೇಶ್ವರ ದೇವಸ್ಥಾನ ಹಾಗೂ ಬೀರೇಶ್ವರ ದೇವಸ್ಥಾನಗಳಿವೆ.ಇಲ್ಲಿ ಮೊದಲು ಗ್ರಾಮ ಪಂಚಾಯಿತಿ ಇತ್ತು ಈಗ ಅದು ಪಕ್ಕದ ಆಲೂರಿಗೆ ಸ್ಥಳಾಂತರಿಸಲಾಗಿದೆ.ಸರ್ಕಾರ ಆಹಾರ ಸರಬರಾಜು ಕೇಂದ್ರ ಕೂಡ ಪಕ್ಕದ ಕೆ.ಹಾಗಲಹಳ್ಳಿಗೆ ಸ್ಥಳಾಂತರಿಸಲಾಗಿದೆ.ಇಲ್ಲಿ ಹಾಲಿನ ಡೈರಿ,ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಹಾಗೂ ಹಲವಾರು ಮಹಿಳಾ ಸಹಕಾರ ಸಂಘಗಳಿವೆ. ||ಆಲೂರು||-ಆಲೂರಿನಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಆಲೂರಮ್ಮ ದೇವಾಲಯಗಳಿವೆ.ಗ್ರಾಮ ಪಂಚಾಯಿತಿ ಕೂಡ ಇದೆ. ||ತೊಪ್ಪನ ಹಳ್ಳಿ||ಯಲ್ಲಿ ಆಂಜನೇಯ ಸ್ವಾಮಿ ಬೆಟ್ಟವಿದೆ ಹಾಗೂ ಭೀಮನ ಕೆರೆಯಲ್ಲಿ ಬೆಟ್ಟದ ಅರಸಮ್ಮನ ಬೆಟ್ಟವಿದೆ. ಬೆಟ್ಟದ ಅರಸಮ್ಮನ ಹಬ್ಬವು ಪ್ರತಿವರ್ಷವೂ ಏಳು ಊರುಗಳಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. (ಆಲೂರು, ನೀಲಕಂಠನ ಹಳ್ಳಿ, ಕೆ.ಹಾಗಲ ಹಳ್ಳಿ, ಕಬ್ಬಾರೆ, ಎಲೆದೊಡ್ಡಿ, ಹಳ್ಳಿ ಕೆರೆ, ಭೀಮನ ಕೆರೆ) || ಕೆ.ಹೊನ್ನಲಗೆರೆ 'ಇಲ್ಲಿ

(ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ,ನಾಡ ಕಛೇರಿ,ದೂರವಾಣಿ ವಿನಿಮಯ ಕೇಂದ್ರ,ಪಶು ಚಿಕಿತ್ಸಾ ಕೇಂದ್ರ,ಚಾಮುಂಡೇಶ್ವರಿ ವಿದ್ಯುತ್ ಕೇಂದ್ರ,ಶಾಲಾ ಕಾಲೇಜುಗಳಿವೆ,ಆರ್.ಕೆ ಎಜುಕೇಷನ್ ಟ್ರಸ್ಟ್,ಸರ್ಕಾರಿ ಜೂನಿಯರ್ ಕಾಲೇಜು,ವಿಜಯ ಬ್ಯಾಂಕ್,ಕಾವೇರಿ ಗ್ರಾಮೀಣ ಬ್ಯಾಂಕ್,ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್)ಗಳಿವೆ. 

||ಕೊಕ್ಕರೆ ಬೆಳ್ಳೂರು|| ವಲಸೆ ಬರುವ ಹಕ್ಕಿಗಳ ಪ್ರಾಕೃತಿಕ ಪಕ್ಷಿಧಾಮ.ಹಾಗೂ ಕರ್ನಾಟಕದಲ್ಲೆ ಒಂದು ಸುಂದರ ಪಕ್ಷಿಧಾಮ ಎಂದು ಹೆಸರಾಗಿದೆ. ಮದ್ದೂರಿನಿಂದ ಕೆ.ಹೊನ್ನಲಗೆರೆಯ ಮೂಲಕ ಹೋಗಬಹುದು. ||ಚಿಕ್ಕ ಅರಸಿನಕೆರೆ|| ಇಲ್ಲಿನ ಬಸವ ಮತ್ತು ಭೈರವೇಶ್ವರ ದೇವಾಲಯವು ಪ್ರಸಿದ್ಧ ಯಾತ್ರಾಸ್ಥಳವಾಗಿ ಮಾರ್ಪಾಡಾಗಿದೆ, ಇಲ್ಲಿನ ಬಸವ ಬಹಳ ಪ್ರಸಿದ್ಧಿ. ಇದು ಮದ್ದೂರಿನಿಂದ ಎಂಟು ಕಿಲೋಮೀಟರ್ ದೂರದಲ್ಲಿದೆ.

                                                                                                                                                                                                                               |ಶಿವಪುರ| ಇತಿಹಾಸ ಪ್ರಸಿದ್ಧ ಸತ್ಯಾಗ್ರಹ ಸೌಧವಿರುವುದು ಇಲ್ಲಿಯೆ.

||ಹನುಮಂತನಗರ|| ಆತ್ಮಲಿಂಗೆಶ್ವರ ದೇವಾಲಯ, ಈ ದೇವಾಲಯವು ಭಾರತಿ ನಗರದಿಂದ(ಕೆ.ಎಮ್.ದೊಡ್ಡಿಯಿಂದ) ೩ ಕಿ.ಮಿ. ದೂರದಲ್ಲಿದೆ.

ಆಲೂರು ಶ್ರೀ ಬೀರೇಶ್ವರ ದೇವಾಲಯ
       ಈ ದೇವಾಲಯವು ಮದ್ದೂರು ತಾಲ್ಲೂಕು ಕಸಬಾ ಹೋಬಳಿಯ ವ್ಯಾಪ್ತಿಗೆ ಬರುತ್ತದೆ. ಈ ದೇವಾಲಯವು ಮುಖ್ಯವಾಗಿ ಕುರುಬ ಜನಾಂಗಕ್ಕೆ ಸೇರಿದ ಒಂದು ಅತಿಮುಖ್ಯವಾದ ದೇವಾಲಯ. ಇಲ್ಲಿ ಪ್ರತಿ ಸೋಮವಾರ ಮತ್ತು ಗುರುವಾರಗಳಲ್ಲಿ ಬೀರೇಶ್ವರ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಈ ದೇವರ ಜೊತೆಯಲ್ಲಿ ಇತರ ದೇವರುಗಳಾದ ಶ್ರೀ ಸಣ್ಣಕ್ಕರಾಯ ಸ್ವಾಮಿ-ಅರಸಿನಕೆರೆ, ಶ್ರೀ ಹುಲಿ ಹುಚ್ಚಪ್ಪ ಸ್ವಾಮಿ -ಕೋಡಂಬಳ್ಳಿ ಮತ್ತು ಶ್ರೀ ಮಲವಪ್ಪ ಸ್ವಾಮಿ-ಮಾಗಡಿ ಸೇರಿ ಅದ್ಧೂರಿಯಾಗಿ ದಸರಾವನ್ನು ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳಲ್ಲಿ ನೆಲಸಿರುವ ಜನರು-ಭಕ್ತಾದಿಗಳು ಬಂದು ಈ ದೇವರುಗಳ ಕೃಪೆಗೆ ಒಳಗಾಗುತ್ತಾರೆ.

ನಂಬಿನಾಯಕನಳ್ಳಿ ಪಟ್ಟಲದಮ್ಮ ದೇವಾಲಯ. ಚಿಕ್ಕಹೊಸಗಾವಿ.

ಕಾಡುಕೊತ್ತನಹಳ್ಳಿ ಶ್ರೀ ವೀರಭಧ್ರೆಶ್ವರ ದೇವಾಲಯ, ಕಾಡುಕೋತ್ತನಹಳ್ಳಿ, ಕೆ.ಎಮ್.ದೊಡ್ಡಿಯಿ೦ದ ೮ ಕೀಮೀ ದೂರದಲ್ಲಿದೆ.ಸುಮಾರು ನೂರಾರು ವರ್ಷಗಳ ಇತಿಹಾಸ ಇದೆ ಅಲ್ಲದೆ, ಶಿವನ ದೇವಾಲಯ, ಮಹದೇಶ್ವರ ದೇವಾಲಯ, ಚಾಮು೦ಡೇಶ್ವರಿ ದೇವಾಲಯ, ಮಾರಮ್ಮ ದೇವಾಲಯ ಇನ್ನು ಅನೇಕ ದೇವಾನುದೇವತೇಗಳ ದೇವಾಲಯಗಳಿವೆ. ಹಲವು ವಿವಿಧ ರೀತಿಯ ವೀರಗಲ್ಲು ಸ್ಥಾಪಿತವಾಗಿವೆ.

ಮಲ್ಲನಕುಪ್ಪೆ - ಪ್ರಸಿದ್ದ ಶಕ್ತಿ ದೇವತೆ ಶ್ರೀ ದಂಡಿನೇಶ್ವರಿ ದೇವಾಲಯ, ಆತ್ಗೂರು ಹೋಬಳಿ.

ತಾಲೂಕಿನ ಮಟ್ಟಕ್ಕೆ ಬೆಳೆದ ಮುಖ್ಯ ಗ್ರಾಮಗಳು

ಭಾರತೀನಗರ(ಕೆ.ಎಮ್ ದೊಡ್ಡಿ)
ಕೆಸ್ತೂರು
ಬೆಸಗರಹಳ್ಳಿ
ಕೆ.ಹೊನ್ನಲಗೆರೆ
ಕೊಪ್ಪ
ಕೌಡ್ಲೆ

ಪ್ರಸಿದ್ಧ ವ್ಯಕ್ತಿಗಳು

ಹೆಚ್.ಕೆ.ವೀರಣ್ಣಗೌಡ ಖ್ಯಾತ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಶಿಕ್ಷಣ ಸಚಿವರು.

ಎಸ್.ಎಂ.ಕೃಷ್ಣ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು.

ಅಂಬರೀಷ್ ಮಾಜಿ ಸಚಿವರು ಮತ್ತು ಚಿತ್ರನಟರು.

ಜಿ.ಮಾದೇಗೌಡರ ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು

ಎಂ.ಎಸ್. ಸಿದ್ದರಾಜು, ದಿವಂಗತ ಶಾಸಕರು, ಕಲ್ಪನ ಸಿದ್ದರಾಜು ಮಾಜಿ ಶಾಸಕಿ, ಮದ್ದೂರು ಕ್ಷೇತ್ರ ಎಂ.ಮಂಚಯ್ಯ ಮಾಜಿ ಶಾಸಕರು ಡಿ.ಸಿ. ತಮ್ಮಣ್ಣ, ಮದ್ದೂರಿನ ಶಾಸಕರು, ಮಹೇಶ್ ಚಂದ್, ಮಾಜಿ ಶಾಸಕರು, ಎಸ್.ಎಂ. ಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯರು ಎಸ್. ಗುರುಚರಣ್ ಜಿ.ಪಂ. ಮಾಜಿ ಅಧ್ಯಕ್ಷರು.

ಹೋಬಳಿಗಳು

ಕಸಬಾ-೧ ಮದ್ದೂರು, ಶಿವಪುರ, ವೈದ್ಯನಾಥಪುರ, ಆಲೂರು, ನೀಲಕಂಠನಹಳ್ಳಿ, ಹಾಗಲಹಳ್ಳಿ, ಕಬ್ಬಾರೆ, ಹಳ್ಳಿಕೆರೆ, ಕೆ.ಕೋಡಿಹಳ್ಳಿ,ವಳಗರೆಹಳ್ಳಿ,ಸೊಳ್ಳೇಪುರ,ಗೆಜ್ಜಲಗೆರೆ,ಚಾಮನಹಳ್ಳಿ,ಹುಲುಗನಹಳ್ಳಿ,ಕದಲೀಪುರ,ಕುದುರುಗುಂಡಿ,ಬಿ.ಹೊಸಹಳ್ಳಿ,ಬಿ.ಲಕ್ಕಸಂದ್ರ,ಅಗರಲಿಂಗನದೊಡ್ಡಿ

ಕಸಬಾ-೨ ಅಜ್ಜಹಳ್ಳಿ,ಭೀಮನಕೆರೆ,ಬೋರಪುರ,ಬೂದಗುಪ್ಪೆ,ಬ್ಯಾಡರಹಳ್ಳಿ,ಚಂದಹಳ್ಳಿ,ಚನ್ನಸಂದ್ರ,ಚುಂಚಗಹಳ್ಳಿ,ದಡಿಗ,ದೇಶಹಳ್ಳಿ,ಕೆ.ಬೆಳ್ಳೂರು,ಕೆ.ಹೊನ್ನಲಗೆರೆ,ಮಾಲಗಾರನಹಳ್ಳಿ,ಮೊಬ್ಬಲಗೆರೆ,ನಗರಕೆರೆ,ಸಾದೊಳಲು,ನಾಯಿದೊಡ್ಡಿ.

ಕೊಪ್ಪ

ಆತಗೂರು-ಮಲ್ಲನಕುಪ್ಪೆ,

ಚಿಕ್ಕ ಅರಸಿನಕೆರೆ

ಮದ್ದೂರು ತಾಲೂಕಿನ ಗ್ರಾಮಗಳು

         ಯರಗನಹಳ್ಳಿ,ಅಂಬರಹಳ್ಳಿ , ದೇವೇಗೌಡನದೊಡ್ಡಿ, ಬೊಮ್ಮನಹಳ್ಳಿ, ನಗರಕೆರೆ,ವೈದ್ಯನಾಥಪುರ,ಆಲೂರು, ನೀಲಕಂಠನಹಳ್ಳಿ,ಸೋಮನಹಳ್ಳಿ,ಗೆಜ್ಜಲಗೆರೆ,ಕೋಡಿಹಳ್ಳಿ, ಬೂದಗುಪ್ಪೆ,ಕಬ್ಬಾರೆ,ಕೆ.ಹೊನ್ನಲಗೆರೆ,ಕೆ.ಹಾಗಲಹಳ್ಳಿ,ಡಿ.ಹೊಸೂರು,ಬ್ಯಾಡರಹಳ್ಳಿ,ಹಳ್ಳಿಕೆರೆ,ಚುಂಚಗಹಳ್ಳಿ,ಹುಲಿಕೆರೆ,ಕೊಕ್ಕರೆಬೆಳ್ಳೂರು,ಹೆಮ್ಮನಹಳ್ಳಿ,ಹನುಮಂತಪುರ, ಕದಲೂರು, ಚಿನ್ನನದೊಡ್ಡಿ, ವಳಗೆರೆದೊಡ್ಡಿ, ವಳಗೆರೆಹಳ್ಳಿ, ಸೊಳ್ಳೆಪುರ,ದೇಶಹಳ್ಳಿ, ನಿಡಗಟ್ಟ, ತೈಲೂರು, ತೊಪ್ಪನಹಳ್ಳಿ, ರಾಜೇಗೌಡನದೊಡ್ಡಿ, ಅರೆತಿಪ್ಪೂರು, ಚಂದಹಳ್ಳಿ, ಭೀಮನಕೆರೆ, ಗೊರವನಹಳ್ಳಿ, ಉಪ್ಪಿನಕೆರೆ, ಮಾಲಗಾರನಹಳ್ಳಿ, ಚನ್ನಸಂದ್ರ, ಅಜ್ಜಹಳ್ಳಿ, ತೊರೆಚಾಕನಹಳ್ಳಿ, ಚಿಕ್ಕ ಅರಸಿನಕೆರೆ, ದೊಡ್ಡ ಅರಸಿನಕೆರೆ, ಕೆ.ಎಮ್ ದೊಡ್ಡಿ(ಭಾರತಿನಗರ), ಚಾಕನಹಳ್ಳಿ, ಕ್ಯಾತಗಟ್ಟ, ಕಾರ್ಕಳ್ಳಿ, ಬೊಮ್ಮನದೊಡ್ಡಿ, ಅಂಕೆಗೌಡನದೊಡ್ಡಿ, ಆಲೂರು ದೊಡ್ಡಿ, ರುದ್ರಾಕ್ಷಿ ಪುರ, ಕೊಪ್ಪ, ಬೆಸಗರಹಳ್ಳಿ, ಚಾಮನಹಳ್ಳಿ, ಸಾದೊಳಲು, ಅಗ್ರಲಿಂಗನದೊಡ್ಡಿ, ಕುರಿದೊಡ್ಡಿ, ಆಲಂಶೆಟ್ಟಳ್ಳಿ, ಆತಗೂರು, ಮಲ್ಲನಕುಪ್ಪೆ, ಸುಣ್ಣದ ದೊಡ್ಡಿ

ಶ್ರೀ ನರಸಿಂಹಸ್ವಾಮಿ ಕ್ಷೇತ್ರ

ಶ್ರೀ ನರಸಿಂಹಸ್ವಾಮಿ ಕ್ಷೇತ್ರ , ಮದ್ದೂರು (ಅರ್ಜುನಪುರಿ , ಅಥವಾ ಮರದೂರು) ಮಂಡ್ಯಜಿಲ್ಲೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಚೆನ್ನಪಟ್ಟಣ ಹಾಗೂ ಮಂಡ್ಯದ ನಡುವೆ ಇರುವ ಊರೇ ಮದ್ದೂರು. ಮದ್ದೂರು ವಡೆಯಿಂದ ಖ್ಯಾತವಾದ ಈ ಊರು, ಪುರಾಣ ಪ್ರಾಚೀನ ಪುಣ್ಯಕ್ಷೇತ್ರವೂ ಹೌದು. ಕದಂಬ ಋಷಿಗಳು ಇಲ್ಲಿ ನರಸಿಂಹ ದೇವರನ್ನು ಪೂಜಿಸಿದ ಕಾರಣ ಈ ಇದು ಕದಂಬಕ್ಷೇತ್ರ ಎಂದು ಖ್ಯಾತವಾಗಿದೆ.

ದ್ವಾಪರಯುಗದಲ್ಲಿ ಶ್ರೀಕೃಷ್ಣ ಪರಮಾತ್ಮನ ಜೊತೆ ತೀರ್ಥಯಾತ್ರೆಗಾಗಿ ಇಲ್ಲಿಗೆ ಬಂದ ಅರ್ಜುನನು ಈ ಸ್ಥಳದಲ್ಲಿ ತನಗೆ ಉಗ್ರನರಸಿಂಹನ ರೂಪ ತೋರಿಸುವಂತೆ ಕೋರುತ್ತಾನೆ. ಮತ್ತೆ ಉಗ್ರರೂಪ ತಳೆಯಲು ಸಾಧ್ಯವಿಲ್ಲ ಎಂದು ಹೇಳಿದ ಶ್ರೀಕೃಷ್ಣ ಶಿಲಾರೂಪದಲ್ಲಿ ಬ್ರಹ್ಮದೇವರಿಂದ ಇಲ್ಲಿ ನರಸಿಂಹ ವಿಗ್ರಹ ಪ್ರತಿಷ್ಠಾಪಿಸಿದರಂತೆ. ಹೀಗಾಗಿ ಈ ಊರು ಅರ್ಜುನಪುರಿ ಎಂದೂ ಹೆಸರಾಗಿತ್ತು. ಬಣ್ಣದ ಬೊಂಬೆಗೆ ಹೆಸರಾದ ಚನ್ನಪಟ್ಟಣಕ್ಕೆ ಇಲ್ಲಿಂದ ಮರತೆಗೆದುಕೊಂಡು ಹೋಗುತ್ತಿದ್ದ ಕಾರಣ ಇದಕ್ಕೆ ನಂತರ ಮರದೂರು ಎಂಬ ಹೆಸರು ಬಂತು. ಇದೇ ಮದ್ದೂರಾಯಿತೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಇಲ್ಲಿ ತನ್ನ ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದನಂತೆ. ಮದ್ದು ಸಂಗ್ರಹಿಸಿದ, ಮದ್ದು ತಯಾರಿಸಿದ ಊರು ಮದ್ದೂರಾಯಿತೆನ್ನುತ್ತದೆ ಐತಿಹ್ಯ.

ಹೊಯ್ಸಳರ ಕಾಲದಲ್ಲಿ ಮದ್ದೂರು ಕೆರೆ ಹಾಗೂ ವರದರಾಜ ದೇವಸ್ಥಾನ ನಿರ್ಮಾಣವಾಯಿತೆಂದು ತಿಳಿದುಬರುತ್ತದೆ. ಮದ್ದೂರಿನಲ್ಲಿ ನರಸಿಂಹ, ವರದರಾಜೇಶ್ವರ ಎಂಬ ಮೂರು ಪ್ರಮುಖ ದೇವಾಲಯಗಳಿವೆ. ಪಕ್ಕದಲ್ಲಿ ಪಟ್ಟಾಭಿರಾಮದೇವರ ದೇವಾಲಯವೂ ಇದೆ.

ನರಸಿಂಹ ದೇವಾಲಯ ಹೊಯ್ಸಳ ಶೈಲಿಯಲ್ಲಿದೆ. ಐದು ಅಂತಸ್ತುಗಳ ದ್ರಾವಿಡ ಶೈಲಿಯ ಗೋಪುರವನ್ನು ಈಚೆಗೆ ಕಟ್ಟಲಾಗಿದೆ. ಪ್ರತಿ ಹಂತದಲ್ಲೂ ಜಯ ವಿಜಯರ ಗಾರೆಯ ವಿಗ್ರಹಗಳಿವೆ. ಗರ್ಭಗೃಹದಲ್ಲಿ ಎತ್ತರವಾದ ಕೃಷ್ಣಶಿಲೆಯ ಸುಂದರ ಉಗ್ರನರಸಿಂಹ ಮೂರ್ತಿ ಇದೆ. ಗರ್ಭಗೃಹದ ಮುಂದಿರುವ ಪ್ರಾಕಾರದಲ್ಲಿ ಸುಂದರವಾದ ಕಪ್ಪುಕಲ್ಲಿನ ವೃತ್ತಾಕಾರದ ಕಂಬಗಳಿದ್ದು ಇದರಲ್ಲಿ ಸೂಕ್ಷ್ಮಕೆತ್ತನೆಗಳಿವೆ. ಹೊರ ಪ್ರಾಕಾರದಲ್ಲಿ ಕಲ್ಲಿನ ಕಂಬಗಳಿವೆಯಾದರೂ ಅದರಲ್ಲಿ ಹೇಳಿಕೊಳ್ಳುವಂಥ ಯಾವುದೇ ಕೆತ್ತನೆ ಇಲ್ಲ.

ಗರ್ಭಗೃಹದಲ್ಲಿರುವ ಉಗ್ರನರಸಿಂಹಸ್ವಾಮಿಗೆ ಎಂಟು ಕೈಗಳು, ಮೂರು ಕಣ್ಣು ಇರುವುದು ವಿಶೇಷ. ತ್ರಿನೇತ್ರನಾದ ಶಿವ ಮುಕ್ಕಣ್ಣ ಎಂದು ಹೆಸರಾಗಿದ್ದಾರೆ. ಆದರೆ, ಮದ್ದೂರಿನಲ್ಲಿ ಬಹು ಅಪರೂಪದ ಮೂರು ಕಣ್ಣಿನ ನರಸಿಂಹಸ್ವಾಮಿಯ ವಿಗ್ರಹವಿದೆ. ಎಂಟು ಕೈಗಳ ಪೈಕಿ ಎರಡುಗಳಿಂದ ತೊಡೆಯ ಮೇಲೆ ಮಲಗಿಸಿಕೊಂಡ ಹಿರಣ್ಯಕಶಿಪುವಿನ ಕರಳು ಬಗೆದು ಮಾಲೆ ಹಾಕಿಕೊಳ್ಳುತ್ತಿರುವ ನರಸಿಂಹ ದೇವರ, ಇನ್ನೆರೆಡು ಕೈಗಳಲ್ಲಿ ಪಾಶಾಂಕುಶಗಳನ್ನು, ಉಳಿದೆರೆಡು ಕೈಗಳಲ್ಲಿ ಶಂಖ, ಚಕ್ರಗಳಿವೆ,

ದೇವತಾವಿಗ್ರಹದ ಎಡಭಾಗದಲ್ಲಿ ವಿಷ್ಣುವಿನ ವಾಹನ ಗರುಡನಿದ್ದನೆ, ಬಲಭಾಗದಲ್ಲಿ ಹಿರಣ್ಯಕಶಿಪುವಿನ ಪುತ್ರ ಹಾಗೂ ನರಸಿಂಹಾವತಾರಕ್ಕೆ ಕಾರಣರಾದ ಪ್ರಹ್ಲಾದರಿದ್ದಾರೆ. ಸ್ವಾಮಿಗಿರುವ ಮೂರನೇ ಕಣ್ಣು ಹಿರಣ್ಯಕಶಿಪುವಿನ ಸಂಹಾರದ ವೇಳೆ ಸೃಷ್ಟಿಯಾಯಿತೆಂದು ಹೇಳಲಾಗುತ್ತದೆ. ಉಗ್ರಸ್ವರೂಪಿಯಾದ ಈ ನರಸಿಂಹನನ್ನು

ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ ಎಂದು 48 ಬಾರಿ ಹೇಳಿಕೊಂಡು ಪೂಜಿಸಿದರೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ ಎಂದು ಪುರೋಹಿತರಾದ ಶ್ರೀ.ಸಿಂಗಾಯಂಗಾರ್ ಹೇಳುತ್ತಾರೆ.

ದೇವಾಲಯದ ಒಳಾಂಗಣದಲ್ಲಿ ಶ್ರೀನಿವಾಸದೇವರ ಹಾಗೂ ಶ್ರೀಕೃಷ್ಣನಿಗೆ ಹಾಲುಣಿಸುತ್ತಿರುವ ಯಶೋಧಾ ವಿಗ್ರಹಗಳು ಅತ್ಯಂತ ಅಪರೂಪದ ವಿಗ್ರಹಗಳೆಂಬುದರಲ್ಲಿ ಸಂದೇಹವೇ ಇಲ್ಲ. ಒಳಪ್ರಕಾರದಲ್ಲಿ ಸೌಮ್ಯನಾಯಕಿ ಹಾಗೂ ನರಸಿಂಹನಾಯಕಿ ವಿಗ್ರಹಗಳೂ ಇವೆ. ದೇವಾಲಯದಲ್ಲಿ ಸೀತಾ, ಲಕ್ಷ್ಮಣ, ಆಂಜನೇಯ ಹಾಗೂ ಶ್ರೀರಾಮ ದೇವರ ವಿಗ್ರಹಗಳಿವೆ.

ಊರಿನಲ್ಲಿರುವ ದೇಶೇಶ್ವರ ದೇವಾಲಯ ಗಂಗರ ಕಾಲದ ವಾಸ್ತು ವಿನ್ಯಾಸ ಒಳಗೊಂಡಿದೆ. ಇದರ ಹೊರಗೋಡೆಗಳನ್ನು ಇತ್ತೀಚೆಗೆ ಬಳಪದ ಕಲ್ಲಿನಲ್ಲಿ ನಿರ್ಮಿಸಲಾಗಿದೆ. ದೇವಾಲಯದ ನಂದಿಮಂಟಪ ಸುಂದರವಾಗಿದೆ. ಗ್ರಾಮದೇವತೆ ಮದ್ದೂರಮ್ಮನ ದೇವಾಲಯವೂ ಇಲ್ಲಿದೆ. ಪ್ರತಿವರ್ಷ ಏಪ್ರಿಲ್-ಮೇ ತಿಂಗಳಿನಲ್ಲಿ ಜಾತ್ರೆ ನಡೆಯುತ್ತದೆ.


-ಬೂ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.